Bank strike in karanataka.ಮಾರ್ಚ್ 24 & 25 ರಂದು ಬ್ಯಾಂಕ್ ಮುಷ್ಕರ.
Introduction:ನಮಸ್ಕಾರ ಕರ್ನಾಟಕದ ಜನತೆಗೆ, ಈ ಒಂದು ಲೇಖನದಲ್ಲಿ ಇಂದು ನಾವು ಮಾರ್ಚ್ 24 & 25 ರಂದು ಬ್ಯಾಂಕ್ ಮುಷ್ಕರದ. (Bank strike in karanataka). ಈ ಮುಷ್ಕರಕ್ಕೆ ಕಾರಣಗಳೇನು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಷ್ಟಪಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಿ. ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ:
ಬ್ಯಾಂಕ್ ಮುಷ್ಕರಕ್ಕೆ ಪ್ರಮುಖ ಕಾರಣ:Bank strike in karanataka
ಸ್ನೇಹಿತರೆ, ಇದೀಗ ನಡೆಯುತ್ತಿರುವ ಬ್ಯಾಂಕ್ ಮುಷ್ಕರಕ್ಕೆ ಪ್ರಮುಖ ಕಾರಣಗಳು, ಭಾರತೀಯ ಬ್ಯಾಂಕುಗಳ ಸಂಘದ ಜೊತೆಯಲ್ಲಿ ನಡೆದ ಪ್ರಮುಖ ಬೇಡಿಕೆಗಳ ಚರ್ಚೆಗಳಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಫಲಿತಾಂಶ ನೀಡಿದ ಕಾರಣ, ರಾಷ್ಟ್ರವ್ಯಾಪಿ ಬ್ಯಾಂಕುಗಳ ಮುಷ್ಕರ ನಡೆಸಲು UFBU ನಿರ್ಧರಿಸಿದೆ. ಈ ಒಂದು ಚರ್ಚೆಯಲ್ಲಿ ಎಲ್ಲಾ ಬ್ಯಾಂಕುಗಳ ಖೇಡರಗಳಲ್ಲಿ ಸಿಬ್ಬಂದಿಗಳ ನೇಮಕಾತಿ ಹಾಗೂ ವಾರದ ಐದು ದಿನಗಳ ಕೆಲಸದ ನಿಯಮ ಮತ್ತು ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಪ್ರಸ್ತಾವನೆ ಮಾಡಲಾಯಿತು. ಆದರೆ ಇದರಲ್ಲಿ ಕೆಲವೊಂದು ಪ್ರಮುಖ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎ ಚಂದ್ರಶೇಖರ್ ಹೇಳಿದ್ದಾರೆ. 9 ಬ್ಯಾಂಕ್ ನೌಕರರ ಒಕ್ಕೂಟವಾದ UFBU ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸಗಾರರು ಹಾಗೂ ನಿರ್ದೇಶಕರ ನೇಮಕಾತಿ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು:Bank strike in karanataka
ಹಾಗಾಗಿ ನೀವೆಲ್ಲರೂ ಮುನ್ನೆಚ್ಚರಿಕೆಯ ಕ್ರಮವಾಗಿ ನಿಮ್ಮ ಯಾವುದೇ ರೀತಿಯ ಬ್ಯಾಂಕಿನ ವಹಿವಾಟುಗಳು ಇದ್ದರೆ, ಅವುಗಳನ್ನು ಶೀಘ್ರದಲ್ಲಿ ಮುಗಿಸಿಕೊಳ್ಳುವುದು ಉತ್ತಮ, ಕಾರಣ ಬ್ಯಾಂಕ್ ಗಳ ರಜೆಯು ಶನಿವಾರದಿಂದ – ಬುದುವಾರದವರೆಗೆ ನೀವು ಯಾವುದೇ ರೀತಿಯ ಬ್ಯಾಂಕ್ ನ ಕಾರ್ಯ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಶನಿವಾರ, ಎರಡನೇ ಶನಿವಾರ ಆಗಿರುವುದರಿಂದ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ, ರವಿವಾರ ವಾರದ ರಜೆಯಾಗಿದ್ದು, ಸೋಮವಾರ ಮತ್ತು ಮಂಗಳವಾರ ಬ್ಯಾಂಕುಗಳ ಮುಷ್ಕರ ಇದ್ದು. ಒಟ್ಟಾರೆಯಾಗಿ ನಾಲ್ಕು ದಿನಗಳ ಬ್ಯಾಂಕಿನ ವಹಿವಾಟುಗಳನ್ನು ನೀವು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಶೀಘ್ರದಲ್ಲಿ ಮುಗಿಸಿಕೊಳ್ಳುವುದು ಶ್ರೇಯಸ್ಕರ.
ಈ ಮಾಹಿತಿಗಳನ್ನು ಓದಿ:
Sunita Williams.ಸುನಿತಾ ವಿಲಿಯಮ್ಸ್ ಮರಳಿ ಭೂಮಿಗೆ..! ಇಲ್ಲಿದೆ ಸಂಪೂರ್ಣ ಮಾಹಿತಿ.
SBI Har Ghar Lakhpati Yojana 2025: SBIನ ಹೊಸ ಹೂಡಿಕೆ ಯೋಜನೆ 2025. Quickly Apply.











